Tuesday, September 29, 2015

ಹೀಗೊಂದು ಸಂವಾದ



ಒಬ್ಬ ಸ್ನೇಹಿತನೊಂದಿಗೆ ಆದ ಸಂವಾದ ಇದು

ನೀನ್ಯಾಕೆ ಅವ್ನ ಹತ್ರ ಮಾತು ಬಿಟ್ಟಿರೋದು ? ಅವ್ನೂ ನೀನೂ ಒಳ್ಳೆ ಫ್ರೆಂಡ್ಸ್ ಅಲ್ವಾ !

ಕೆಟ್ಟ ಫ್ರೆಂಡ್ಸ್ ಅಂತ ಬೇರೆ ಇರ್ತಾರ !? ಅವನ ಮರು ಪ್ರಶ್ನೆ

ಹೂಂ ಇರ್ತಾರೋ ! ಹಣ್ಣುಗಳ ತರಹ ...ಒಳ್ಳೆ ಹಣ್ಣು , ಕೆಟ್ಟ ಹಣ್ಣು, ಕೊಳೆತ ಹಣ್ಣು ...

ಕೊಳೆತ ಹಣ್ಣನ್ನ ಕಸ ಅಂತ ಕಸದ ಬುಟ್ಟಿಗೆ ಹಾಕಬೇಕು; ಅದನ್ನ ಕಸ ಅಂತಾರೆ ಹೊರತು ಹಣ್ಣು ಅನ್ನೋಲ್ಲ

ನಿಜವೇನೋ ! ವಾದಕ್ಕೆ ಅಂತ ನಾ ಬಳಸಿದ ಉಪಮೆಗೆ ತಕ್ಕ ಉತ್ತರ ಅದು ! ಆದರೂ ಅಷ್ಟು ತಾರ್ಕಿಕವಾಗಿ ಯೋಚಿಸೋಕೆ ಮನುಷ್ಯ ಮಾತ್ರನಿಂದ ಸಾಧ್ಯವೇ?

ನಾವು ಇಷ್ಟ ಪಟ್ಟವ್ರನ್ನ ಕಳ್ಕೊತ ಆಗೋ ಬೇಜಾರಿನ ತೀವ್ರತೆ ಹಾಳಾಗಿರೊ ಹಣ್ಣನ್ನ ಕಸದ ಬುಟ್ಟಿಗೆ ಹಾಕೋವಾಗ ಇರುತ್ತಾ !

Not all stories have happy ending

Not all stories have happy ending Ananya .. Most of the stories do ! ಶ್ರೇಯಾ ಇವತ್ತು ಅನನ್ಯ ಹತ್ರ ಹೇಳ್ತಿದ್ಲು. ಕೆಲವು ಕ್ಷಣಗಳು ಸೂಪರ್ ಚಂದ. ೧೧ ವರ್ಷದ ಪೋರಿ ಬಾಯಲ್ಲಿ ಈ ಮಾತು ಕೇಳಿ ಒಂದು ಕ್ಷಣ ಅವಾಕ್ಕಾದೆ. ಆದ್ರೆ ಖುಷಿನೂ ಹೆಮ್ಮೆನೂ ಒಟ್ಟಿಗೆ ಆಯ್ತು.

ಮನಸ್ಸು ಹಗುರವಾಗಿರೊವಾಗ ಎಲ್ಲವೂ ಚಂದ. ನನ್ನ ಪುಟ್ಟಣ್ಣ ಹೇಳಿದ ಮಾತು :- ಮುಳ್ಳು ಚುಚ್ಚಿದಾಗ ಬರೀ ಆ ಮುಳ್ಳೇ ಜಗವೇನೋ ಅಂತ ಕಾಣುತ್ತೆ. Actually ಜಗತ್ತು ಸುಂದರ, ವಿಶಾಲ. ಆದರೆ ನೋವಿರೋ ಮನಸ್ಸು ಆ ಮುಳ್ಳು ಚುಚ್ಚಿರೋ ಸ್ಥಿತಿ ತರ . ಅದ್ಕೆ ಆ ನೋವಷ್ಟೆ ಕಾಣ್ಸುತ್ತೆ , ಸುಂದರವಾದ ಜಗತ್ತು ಕಾಣೋಲ್ಲ. ಎಷ್ಟು ನಿಜವಾದ ಮಾತು !